ಆಗಸ್ಟ್ 15ರಂದು ‘ಅಖಂಡ ಭಾರತ ಸಂಕಲ್ಪ ದಿನ’ ವೆಂದು ಆಚರಿಸುತ್ತಾರೆ. ಪ್ರಾಚೀನ ಭಾರತದ ಭಾಗಗಳಾಗಿದ್ದ ಈಗ ಸ್ವತಂತ್ರ ದೇಶಗಳಾಗಿರುವ ಇಂದಿನ ಪಾಕಿಸ್ತಾನ, ಬಾಂಗ್ಲಾ (ಹಾಗೂ ಇತರ) ವನ್ನು ಮತ್ತೆ ಭಾರತದೊಂದಿಗೆ ಸೇರಿಸಲು ಇಂದು ಪ್ರತಿಜ್ಞೆಗೈಯಲಾಗುತ್ತದೆ. ಈ ಆಚರಣೆ ಮೇಲ್ನೋಟಕ್ಕೆ ದೇಶಭಕ್ತಿಯ ಪ್ರತೀಕವೆಂಬಂತೆ ಕಂಡರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುವ ವಿಷಯವೇ ಎಂಬ ಪ್ರಶ್ನೆ ಬರುವುದು ಸುಳ್ಳಲ್ಲ. ಧರ್ಮ ದ್ವೇಷದ ಆಧಾರದ ಮೇಲೆ ವಿಭಜನೆಯಾಗಿರುವ ಈ ದೇಶಗಳು ಮತ್ತೆ ಭಾರತದೊಂದಿಗೆ ಸೇರುವುದು ಖಂಡಿತ ಅಸಂಭವ…. ಒಂದು ವೇಳೆ ಹಾಗೂ ಹೀಗೂ ಅಖಂಡ ಭಾರತ ನಿರ್ಮಾಣವಾದರೆ ಭಾರತದ ಆಂತರಿಕ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸಲೇ ಕಷ್ಟವಾಗುತ್ತದೆ.
ಆಗಸ್ಟ್ 15, 1947 ಭಾರತಕ್ಕೆ ಬ್ರಿಟಿಷರಿಂದ ಸ್ವತಂತ್ರ್ಯ ಸಿಕ್ಕಿದ ದಿನವಾದರೂ, ಅದರ ಮೊದಲೇ ಅಖಂಡವಾಗಿದ್ದ ಭಾರತವನ್ನು ಧರ್ಮದ ಆಧಾರದಲ್ಲಿ ಒಡೆಯುವ ಕೆಲಸವನ್ನು ಬ್ರಿಟಿಷರು ಅದಾಗಲೇ ಮಾಡಿ ಬಿಟ್ಟಿದ್ದರು. ಪಾಕಿಸ್ತಾನ, ಬಾಂಗ್ಲಾ ದೇಶ ಮೊದಲಾದ ಭಾರತದ ಭೂ ಭಾಗಗಳನ್ನು ಭಾರತದಿಂದ ಬೇರ್ಪಡಿಸಿ, ಒಡೆದು ಆಳುವ ನೀತಿಯನ್ನು ಅನುಸರಿಸುವ ಮೂಲಕ ಭಾರತವನ್ನು ತುಂಡರಿಸಿ ಹೋಗಿದ್ದರು ಬ್ರಿಟಿಷರು. ನಾಚಿಕೆಗೇಡಿನ ವಿಷಯವೆನೆಂದರೆ, ಇದಕ್ಕೆ ಭಾರತದ ಕೆಲವು ಜನರ ಬೆಂಬಲವೂ ಅವರಿಗೆ ದೊರೆತಿದೆ. ಇಷ್ಟದರೂ, ಇಂದು ಅಂದರೆ ಆಗಸ್ಟ್ 14 ಅಖಂಡ ಭಾರತ ಸಂಕಲ್ಪ ದಿನವನ್ನು ನಾವು ಆಚರಣೆ ಮಾಡುತ್ತಲೇ ಬಂದಿದ್ದೇವೆ.
ತುಂಡು ತುಂಡಾವಾಗಿರುವ ರಾಷ್ಟ್ರವನ್ನು ಮತ್ತೆ ಅಖಂಡ ಭಾರತವಾಗಿ ಮಾಡುವ ಸಂಕಲ್ಪವನ್ನು ಇಂದಿಗೂ ಮಾಡುತ್ತಲೇ ಇದ್ದೇವೆ. ದೇಶದ ಅಖಂಡತೆಯ ಕನಸನ್ನು ಹೊತ್ತು ಮಡಿದ ಅದೆಷ್ಟೋ ದೇಶಪ್ರೇಮಿ ನಾಯಕರಿಗೆ ನ್ಯಾಯ ಸಲ್ಲಿಸುವ ಸಲುವಾಗಿ ಅಖಂಡ ಭಾರತದ ಕನಸನ್ನು ಇಂದಿಗೂ ಹೊತ್ತುಕೊಂಡೇ ಸಾಗುತ್ತಿದ್ದೇವೆ.
ಆದರೆ ವಾಸ್ತವತೆಯ ಬಗ್ಗೆ ಯೋಚಿಸಿದಾಗ ಭಾರತದ ಭಾಗಗಳಾಗಿದ್ದ ಬಳಿಕ ಇಂಗ್ಲಿಷರ ಕುತಂತ್ರಕ್ಕೆ ಒಳಗಾಗಿ ಭಾರತಕ್ಕೆ ಬೆನ್ನಿಗೆ ಚೂರಿ ಹಾಕಿ ದೇಶದ್ರೋಹವೆಸಗಿದ ಹಲವು ಸೋ ಕಾಲ್ಡ್ ನಾಯಕರ ಅಂದಿನ ತಪ್ಪನ್ನು ಅಷ್ಟು ಸುಲಭವಾಗಿ ಸರಿಪಡಿಸುವುದು ಅಸಾಧ್ಯ. ಭಾಗವಾಗಿ ಹರಿದು ಹಂಚಿ ಹೋಗಿ ಇಂದು ಸ್ವತಂತ್ರ ದೇಶಗಳಾಗಿ ಗುರುತಿಸಿ ಕೊಂಡಿರುವ ರಾಷ್ಟ್ರಗಳನ್ನು ಭಾರತದೊಳಕ್ಕೆ ಸೇರಿಸುವುದು ಸುಲಭದ ಮಾತಿಲ್ಲ. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನೇ ಅದು ನಮ್ಮದು, ಅದು ಭಾರತಕ್ಕೆ ಸೇರಿದ್ದು ಎಂದು ಎದೆ ತಟ್ಟಿ ಹೇಳಿಕೊಳ್ಳಬೇಕಾದರೆ ನಮಗೆ ಸ್ವಾತಂತ್ರ್ಯ ದೊರಕಿ ಇಷ್ಟು ವರ್ಷಗಳೇ ಹಿಡಿಯಿತು. ಅದಕ್ಕೊಬ್ಬ ಸಮರ್ಥ ನಾಯಕನ ಆಡಳಿತಕ್ಕಾಗಿ ಭಾರತ ಕಾಯಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಹಂಚಿಕೆಯಾಗಿ ಹೋಗಿರುವ ರಾಷ್ಟ್ರಗಳನ್ನು ಅಷ್ಟು ಸುಲಭವಾಗಿ ಹಿಂದೂಸ್ಥಾನಕ್ಕೆ ಸೇರಿಸಿಕೊಳ್ಳುವುದು ಅಂದುಕೊಂಡಷ್ಟು ಆರಾಮವಲ್ಲ.
ಅಖಂಡ ಭಾರತ ನಿರ್ಮಾಣ ನಮ್ಮ ಕನಸೇನೋ ಹೌದು. ಈ ಕನಸಿನ ಮೂಲಕ ಮಡಿದ ನಮ್ಮ ಹಿರಿಯರ ಆಶಯಗಳನ್ನು ಈಡೇರಿಸುವುದು ನಮ್ಮ ಕಾಯಕವಾಗಬೇಕು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಅದು ಆಧ್ಯತೆ, ಅಗತ್ಯತೆ ಎರಡೂ ಹೌದು. ಆದರೆ ಹಲವಾರು ಆಂತರಿಕ, ಬಾಹ್ಯ ಸವಾಲುಗಳ ನಡುವೆ ನಾವು ಈ ನಮ್ಮ ಸಂಕಲ್ಪ ನನ್ನು ಈಡೇರಿಸಲು ಹೇಗೆ ಸಾಧ್ಯ. ಒಂದು ವೇಳೆ ಸಂಕಲ್ಪ ಪೂರೈಸಬಹುದೆಂದಾದಲ್ಲಿ ನಂತರದ ದಿನಗಳಲ್ಲಿ ಭಾರತ ಎದುರಿಸಬೇಕಾದ ಸವಾಲುಗಳ ಬಗ್ಗೆಯೂ ಇಂದಿನ ದಿನಗಳಲ್ಲಿ ನಾವು ಯೋಚಿಸಲೇ ಬೇಕಿದೆ. ಅದು ಅನಿವಾರ್ಯತೆ….
ಏಕೆಂದರೆ 1947ರ ಮೊದಲಿನ ಪರಿಸ್ಥಿತಿಯೂ ಈಗ ಭಾರತದಲ್ಲಿಲ್ಲ. ಜೊತೆಗೆ ಭಾರತ ಪಾಕಿಸ್ತಾನಗಳೆರಡೂ ಆಜನ್ಮ ಶತ್ರುಗಳೆಂದೇ ಬಿಂಬಿಸಿಕೊಂಡಿವೆ. ನರಿ ಬುದ್ಧಿ ಯ ಪಾಕಿಸ್ತಾನದಂತಹ ಅನಾಹುತಕಾರಿ ದೇಶ ಭಾರತದ ಜೊತೆಗೆ ವಿಲೀನವಾದರೆ ನಮ್ಮ ದೇಶ ಉಳಿದೀತೆ.
ನಸೀರ
ಕೊಲಾಸೊ ಪ್ಯಾರಾ ಮೆಡಿಕಲ್ ಕಾಲೇಜು, ಮಂಗಳೂರು

2 Comments
Hmm is anyone else experiencing problems with the pictures on this blog loading? I’m trying to determine if its a problem on my end or if it’s the blog. Any feedback would be greatly appreciated.
Very interesting information!Perfect just what I was searching for!