• ಮುಖಪುಟ
  • ಕರಾವಳಿ
    • ದಕ್ಷಿಣ ಕನ್ನಡ
    • ಉಡುಪಿ
    • ಕಾಸರಗೋಡು
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    • ಆರೋಗ್ಯ
    • ಪಾಕ ಶಾಲೆ
    • ಕಲಾಭೂಮಿಕೆ
    • ವಿಶೇಷ ಅಂಕಣ
    • ಸ್ಟೂಡೆಂಟ್ಸ್ ಗ್ಯಾಲರಿ
    • ತುಳು ಚಾವಡಿ
  • ಗ್ಯಾಲರಿ
Facebook Twitter Instagram
  • Advertising
  • Careers
  • Contact Us
Facebook Twitter LinkedIn Pinterest RSS
CitizenLive News
  • ಮುಖಪುಟ
  • ಕರಾವಳಿ
    1. ದಕ್ಷಿಣ ಕನ್ನಡ
    2. ಉಡುಪಿ
    3. ಕಾಸರಗೋಡು
    Featured

    ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

    By newscordinator newscordinator31/05/2020 : 7:35 PM11937
    Recent

    ಪುತ್ತೂರು: ಸಿಂಗಾಣಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

    15/08/2022 : 11:10 AM

    ಮಂಗಳೂರಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ; ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

    15/08/2022 : 10:19 AM

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಾಟಿಂಗ್ ಮಾಡುತ್ತಿದ್ದ ಯುವಕ – ಯುವತಿಯ ತೀವ್ರ ತಪಾಸಣೆ

    14/08/2022 : 7:01 PM
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    1. ಆರೋಗ್ಯ
    2. ಪಾಕ ಶಾಲೆ
    3. ಕಲಾಭೂಮಿಕೆ
    4. ವಿಶೇಷ ಅಂಕಣ
    5. ಸ್ಟೂಡೆಂಟ್ಸ್ ಗ್ಯಾಲರಿ
    6. ತುಳು ಚಾವಡಿ
    Featured

    186 ವರ್ಷದ ಬಳಿಕ ಅಂತ್ಯಕ್ರಿಯೆ ನಡೆಸಲ್ಪಟ್ಟ ಮಹಿಳೆ

    By News Editor29/05/2020 : 1:09 AM8495
    Recent

    ಆ ಸಂಭ್ರಮದ ದಿನಗಳು ಇನ್ನೆಲ್ಲಿ…

    23/09/2022 : 10:11 PM

    ಅಖಂಡವಾಗಿದ್ದ ಈ ರಾಷ್ಟ್ರ ತ್ರಿಖಂಡವಾದದ್ದು ಹೇಗೆ..?

    14/08/2022 : 10:08 AM

    ಕೃಷ್ಣನ ಆಶಯದಂತೆ ಭಾರತ ಉತ್ತುಂಗಕ್ಕೆ ಏರಲಿ.. ಅಖಂಡ ಭಾರತದ ಕನಸು ನನಸಾಗಲಿ

    14/08/2022 : 9:33 AM
  • ಗ್ಯಾಲರಿ
CitizenLive News
Home » ಕರಾವಳಿ » ಯಕ್ಷಗಾನದಲ್ಲಿ ಅಲ್ಲಾಹನ ಅಪಹಾಸ್ಯ ಮಾಡಿದ ವಿಡಿಯೋ ವೈರಲ್.. ಪಾತ್ರಧಾರಿಯಿಂದ ಸ್ಪಷ್ಟನೆ
ಕರಾವಳಿ

ಯಕ್ಷಗಾನದಲ್ಲಿ ಅಲ್ಲಾಹನ ಅಪಹಾಸ್ಯ ಮಾಡಿದ ವಿಡಿಯೋ ವೈರಲ್.. ಪಾತ್ರಧಾರಿಯಿಂದ ಸ್ಪಷ್ಟನೆ

News EditorBy News Editor04/04/2022 : 5:52 PMUpdated:04/04/2022 : 5:53 PMNo Comments1 Min Read

ಉಡುಪಿ: ಯಕ್ಷಗಾನ ಪ್ರದರ್ಶನದ ವೇಳೆ, ಪಾತ್ರಧಾರಿಯೊಬ್ಬರು ಆಂಜನೇಯ ಸ್ವಾಮಿ ಹಾಗೂ ಅಲ್ಲಾಹನ ಕುರಿತು ಮಾಡಿರುವ ಹಾಸ್ಯದ ಹಳೆಯ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಸಾಲಿಗ್ರಾಮ ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿಯಿಂದ ನರಸಿಂಹ ಸೋಮಯಾಜಿ ಇವರ ‘ಶ್ರೀಶನೇಶ್ವರ ಮಹಾತ್ಮೆ’ ಪೌರಾಣಿಕ ಯಕ್ಷಗಾನ ಪ್ರದರ್ಶನವು ಕೆಲವು ವರ್ಷಗಳ ಹಿಂದೆ ಕೋಟ ಹಂದೆ ದೇವಸ್ಥಾನದಲ್ಲಿ ನಡೆದಿತ್ತು. ಈ ಯಕ್ಷಗಾನ ಪ್ರದರ್ಶನ ಸಂಪೂರ್ಣ ವಿಡಿಯೊ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಪ್ರಸಾರವಾಗಿತ್ತು. ಇದರಲ್ಲಿ ಹಿರಿಯ ಕಲಾವಿದ ಮಹಾಬಲೇಶ್ವರ ಭಟ್ ಕ್ಯಾದಗಿ ಮುಸ್ಲಿಮ್ ಪಾತ್ರವನ್ನು ಮಾಡಿದ್ದರು. ಅವರು ಈ ಪ್ರದರ್ಶನದಲ್ಲಿ ಆಂಜನೇಯ ಹಾಗೂ ಅಲ್ಲಾಹನ ಕುರಿತು ಮಾಡಿರುವ ಹಾಸ್ಯದ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಕ್ಷಗಾನ ಕಲಾವಿದ ಮಹಾಬಲೇಶ್ವರ ಭಟ್ ಕ್ಯಾದಗಿ, ಮೂರು ವರ್ಷಗಳ ಹಿಂದಿನ ಈ ವಿಡಿಯೋವನ್ನು ಈಗ ಹರಿಯಬಿಡಲಾಗಿದೆ. ಈ ವಿಚಾರ ನನ್ನ ಗಮನಕ್ಕೂ ಬಂದಿದೆ. ಶನೇಶ್ವರ ಮಹಾತ್ಮೆಯಲ್ಲಿ ಬರುವ ಮುಸ್ಲಿಮ್ ಪಾತ್ರವನ್ನು ನಾನು ಮಾಡಿದ್ದೆ. ನಿಜವಾಗಿ ಅದು ಮುಸ್ಲಿಮ್ ಪಾತ್ರ ಅಲ್ಲ. ಶನಿ ದೇವರು ಮುಸ್ಲಿಮ್ ಪಾತ್ರದಲ್ಲಿ ಹೋಗುವುದಾಗಿದೆ. ಉದ್ದೇಶಪೂರ್ವಕವಾಗಿ ಅಥವಾ ಯಾರಿಗೂ ಅವಮಾನ ಮಾಡಬೇಕೆಂಬ ಉದ್ದೇಶದಿಂದ ಈ ಹಾಸ್ಯವನ್ನು ಹೇಳಿಲ್ಲ. ಇದು ತುಂಬಾ ಹಳೆಯ ಹಾಸ್ಯವಾಗಿದೆ. ಇದರಲ್ಲಿ ಈಶ್ವರ, ಗಣಪತಿ ದೇವರ ಬಗ್ಗೆಯೂ ಹಾಸ್ಯಗಳಿವೆ. ನಾನು ಸಹಜವಾಗಿ ಮಾತನಾಡುತ್ತ ಈ ಹಾಸ್ಯವನ್ನು ಹೇಳಿದ್ದೇನೆ. ನನಗೂ ಮೊದಲು ಮತ್ತು ನಂತರವೂ ಈ ಹಾಸ್ಯವನ್ನು ಹಲವು ಮಂದಿ ಹೇಳಿರಬಹುದು ಎಂದು ಅವರು ತಿಳಿಸಿದರು.

ಆ ಪಾತ್ರದ ವಾತಾವರಣಕ್ಕೆ ಸಂಬಂಧಿಸಿದ ಹಾಸ್ಯ ಇದಾಗಿರುವುದು ಬಿಟ್ಟರೆ ಯಾವುದೇ ಜಾತಿ ಧರ್ಮದ ನಿಂದನೆ, ಅವಮಾನ ಮಾಡುವುದಕ್ಕಾಗಿ ಹೇಳಿದ್ದಲ್ಲ. ಇದರಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಕಳೆದ 20 ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿ ದುಡಿಯುತ್ತಿರುವ ಮಹಾಬಲೇಶ್ವರ ಭಟ್ ಕ್ಯಾದಗಿ ಹೇಳಿದ್ದಾರೆ.

Share. Facebook Twitter Pinterest LinkedIn Tumblr Email
Previous Articleಸೈಡ್ ಎಫೆಕ್ಟ್ ಇಲ್ಲದೇ ದೇಹದ ತೂಕ ಇಳಿಸುವುದು ಹೇಗೆ..?
Next Article ಗೃಹ ಬಳಕೆ ವಿದ್ಯುತ್​ ದರ ಏರಿಕೆ… ಏಪ್ರಿಲ್ 1ರಿಂದಲೇ ಪರಿಷ್ಕೃತ ದರ ಅನ್ವಯ

Related Posts

ಇಂಡೋ-ಪಾಕ್ ಪ್ರೇಮ ಕಥೆ – ಪೋಲೀಸರ ಬಲೆಗೆ ಬಿದ್ದ ಇಕ್ರಾ-ಯಾದವ್ ಜೋಡಿ!

24/01/2023 : 1:32 PM

‘ಗೌಜಿ ಗಮ್ಮತ್‌’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ – ಶೀಘ್ರದಲ್ಲೇ ಸಿನಿಮಾ ಬೆಳ್ಳಿತೆರೆಗೆ!

19/01/2023 : 10:54 PM

ಆ ಸಂಭ್ರಮದ ದಿನಗಳು ಇನ್ನೆಲ್ಲಿ…

23/09/2022 : 10:11 PM

Comments are closed.

Copyright © 2019 CitizenLive News | Designed by:
  • About
  • Privacy
  • Contact

Type above and press Enter to search. Press Esc to cancel.