ಉಡುಪಿ: ಸಿದ್ಧರಾಮಯ್ಯ ಸಂಘವನ್ನು ಆರೆಸ್ಸೆಸ್ಸನ್ನು ಪುಂಖಾನುಪುಂಖವಾಗಿ ಬೈಯುತ್ತ ಓಡಾಡಿದರು. ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ಸಂದರ್ಭ ಬದುಕಿಗೆ ಬೆಂಕಿ ಬಿದ್ದಂತೆ ಆಡಿದರು. ಸಾವರ್ಕರ್ ಜೀವನ ಪ್ರತಿ ಯುವಕರಿಗೆ ತಲುಪಿಸಬೇಕು. ಸಿದ್ದರಾಮಯ್ಯ ಈಗಾಗಲೇ ಕಸದಬುಟ್ಟಿಯಲ್ಲಿ ಇದ್ದಾರೆ. ಮುಂದೆ ಅವರು ದೊಡ್ಡ ಕಸದಬುಟ್ಟಿಗೆ ಹೋಗುತ್ತಾರೆ. ಸಿದ್ದರಾಮಯ್ಯ ಅವರ ಎಲ್ಲಾ ಮಾತಿಗೆ ಉತ್ತರ ಕೊಡಬೇಕಾಗಿಲ್ಲ. ಸಿದ್ದರಾಮಯ್ಯ ಅವರಿಗೆ ಉತ್ತರ ಕೊಟ್ಟರೆ ಕೊಚ್ಚೆಗೆ ಕಲ್ಲು ಹೊಡೆದಂತೆ. ಜನ ಬಿಜೆಪಿಗೆ ಮತ ಕೊಟ್ಟಿದ್ದು ಅಭಿವೃದ್ಧಿ ವಿಚಾರಕ್ಕೆ. ಪ್ರತಿ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆಗೆ ಉತ್ತರಿಸಬೇಕಾಗಿಲ್ಲ ಎಂದು ಉಡುಪಿಯಲ್ಲಿ ಬಿಜೆಪಿ ಮುಖಂಡ ಬಿ.ಎಲ್ ಸಂತೋಷ್ ಹೇಳಿಕೆ ನೀಡಿದ್ದಾರೆ.

ಇಂದು ಸಿದ್ದರಾಮಯ್ಯ ಮಾತನಾಡಿದ ಕೂಡಲೇ ನಳಿನ್ ಕುಮಾರ್ ಕಟೀಲು ಅದಕ್ಕೆ ಉತ್ತರ ಕೊಡುತ್ತಾರೆ. ನಳಿನ್ ಕುಮಾರ್ಗೆ ಓಟು ಕೊಟ್ಟಿರುವುದು ಸಿದ್ದರಾಮಯ್ಯಗೆ ಉತ್ತರ ಕೊಡಲು ಅಲ್ಲ. ಸಿದ್ದರಾಮಯ್ಯನವರು ಇಷ್ಟು ವರ್ಷ ಏನು ಮಾಡಿ ತೋರಿಸಿಲ್ಲ. ನೀವು ಏನಾದರೂ ಮಾಡಿ ತೋರಿಸಿ ಅಂತ ಎಂದು ಅವರು ತಿಳಿಸಿದರು.
ಸಿದ್ದರಾಮಯ್ಯ ಸ್ವಲ್ಪ ದಿನ ಆರೆಸ್ಸೆಸ್ಗೆ ಬೈದು ನಂತರ ಮರೆತು ಹೋಗುತ್ತಾರೆ. ನೀವು ಇಂತಹದಕ್ಕೆಲ್ಲ ಉತ್ತರ ಕೊಡಬೇಕೇ ಎಂಬುದನ್ನು ಯೋಚನೆ ಮಾಡಿ. ಮೇಲ್ಸೇತುವೆಗೆ ಸಾರ್ವಕರ್ ಹೆಸರು ಇಟ್ಟರೆ ಬದುಕಿಗೆ ಬೆಂಕಿ ಬಿದ್ದ ರೀತಿಯಲ್ಲಿ ಹಾರಾಡಿದ ಸಿದ್ದರಾಮಯ್ಯಗೆ ಉತ್ತರ ಕೊಡಬೇಕೆ ಅಥವಾ ಸಾರ್ವಕರ್ನ ಬದುಕನ್ನು ಪ್ರತಿ ಯುವಜನತೆಯ ಮನಸ್ಸಿಗೆ ತಲುಪಿಸಬೇಕೆ ಎಂಬುದನ್ನು ಯೋಚಿಸಬೇಕು. ಸಿದ್ದರಾಮಯ್ಯ ಈಗಾಗಲೇ ಕಸದ ಬುಟ್ಟಿಯಲ್ಲಿದ್ದಾರೆ. ಮುಂದೆ ದೊಡ್ಡ ಕಸದ ಬುಟ್ಟಿಗೆ ಹೋಗುತ್ತಾರೆ. ನಾವು ಯಾಕೆ ಅದಕ್ಕೆ ಪೈಪೋಟಿ ಕೊಡಬೇಕು. ಇಂದು ಜನ ನಮ್ಮನ್ನು ಸ್ವೀಕಾರ ಮಾಡುತ್ತಿದ್ದಾರೆ ಎಂದರು.
ಜನಪ್ರತಿನಿಧಿಗಳನ್ನು ಜನ ಕೇವಲ ಚುನಾವಣೆಯಲ್ಲಿ ಆಯ್ಕೆ ಮಾಡಿ ಕಳುಹಿಸುವುದಲ್ಲ, ಕಳುಹಿಸಿದವರು ಸರಿ ಇರಬೇಕು. ಅವರು ಅಲ್ಲಿ ಸಮಾಜ ಪರಿವರ್ತನೆ ಆಗುವ ನಿಟ್ಟಿನಲ್ಲಿ ಏನು ಕೆಲಸ ಮಾಡುತ್ತಾರೆ ಎಂಬುದು ಮುಖ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.